ಆತ್ಮೀಯ ವೃತ್ತಿ ಬಾಂಧವರೊಂದಿಗೆ......
"ಛಲ ಇಲ್ಲದ ಮನುಷ್ಯ ಫಲವಿಲ್ಲದ ಮರದಂತೆ"
ಎನ್ನುವ ಗಾದೆ ಮಾತು ನೆನಪಾಗುತ್ತದೆ ನನಗೆ.
ಆತ್ಮೀಯ ನನ್ನ ವೃತ್ತಿ ಬಾಂಧವ ಸಹೋದರ- ಸಹೋದರಿಯರೇ ನಮ್ಮಗೆ ಈ ವರ್ಷ ನಮ್ಮ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಿಕೊಳ್ಳಲು ಒಂದು ಸುವರ್ಣಾವಕಾಶವೇ ಇದೆ.ಏಕೆಂದರೆ ನೀವುಗಳು ಈ ಮೊದಲಿನಕ್ಕಿಂತಲೂ ಒಂದು ವಿಶಿಷ್ಟವಾದ, ಸಾಮಾಜಿಕ ಕಳಕಳಿಯುಳ್ಳ, ಶ್ಲಾಘನೀಯ ಸೇವೆಯನ್ನು ಆಯಾ ಗ್ರಾಮಗಳ ವಠಾರಗಳಲ್ಲಿ, ಓಣಿಗಳಲ್ಲಿ ಬಹಳ ಉತ್ತಮವಾಗಿ ಮಾಡುತ್ತಿದ್ದಿರಾ,ಇದನ್ನೇ ಒಂದು ಅವಕಾಶವಾಗಿ ಬಳಸಿಕೊಂಡು ಪಾಲಕ-ಪೋಷಕರೊಂದಿಗೆ ಆತ್ಮೀಯವಾದ ಸಂಬಂಧವನ್ನೂ ಬೆಳೆಸಿ ನಿಮ್ಮ ನಿಮ್ಮ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಿಕೊಳ್ಳುವಲ್ಲಿ ಮುನ್ನುಗಿ.
ಪಾಲಕರಲ್ಲಿ ವಿಶ್ವಾಸ ತುಂಬಿ ಅವರ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ, ಸಮವಸ್ತ್ರ, ಪಠ್ಯಪುಸ್ತಕ. ......... ಇತ್ಯಾದಿ ಸೌಲಭ್ಯಗಳನ್ನು ನೀಡುವುದಲ್ಲದೆ ಗುಣಮಟ್ಟದ ಶಿಕ್ಷಣ ನೀಡುವ ಭರವಸೆ ನೀಡಿರಿ.ಈ ವರ್ಷ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಆಗುವಂತೆ ಯೋಜನೆ ಹಾಕಿಕೊಳ್ಳಿ.
*ಯಾರಿಗಾದ್ರೂ ಹಣ,ಬಟ್ಟೆ,ಆಹಾರ,ದಾನ ಮಾಡಿದ್ರೆ ಕೆಲ ಹೊತ್ತು,ಕೆಲ ವರ್ಷಗಳಲ್ಲಿ ಮರೆಯುತ್ತಾರೆ, ಆದರೆ ವಿದ್ಯಾದಾನದಿಂದ ನಮ್ಮನ್ನು ಖಂಡಿತ ಸಾಯುವವರೆಗೆ ಮರೆಯಲಾರರು. ಅದಕ್ಕಾಗಿ ಆತ್ಮೀಯರೇ ಈ ವೃತ್ತಿಯ ಪಾವಿತ್ರ್ಯತೆಯನ್ನು ಮತ್ತಷ್ಟು ಹೆಚ್ಚಿಸಲು ಎಲ್ಲರೂ ಕೈ ಜೋಡಿಸೋಣ*
*ಶುಭ ರಾತ್ರಿ🙏🙏*
ಇಂತಿ ನಿಮ್ಮ
ಮಹಾದೇವ.ಎಸ್.ಮಡಿವಾಳ.
ಸ.ಸಂ.ವ್ಯಕ್ತಿ. ಸ.ಸಂ.ಕೇಂದ್ರ
ಹೋಳಸಮುದ್ರ.
Comments